ಅಧ್ಯಕ್ಷರ ಸಂದೇಶ

ವಿದ್ಯಾ ದತ್ತ
ಆತ್ಮೀಯ ಮಲ್ಲಿಗೆ ಕನ್ನಡ ಸಂಘದ ಸದಸ್ಯರಿಗೆಲ್ಲಾ  ನಮಸ್ಕಾರಗಳು,

ತಮಗೆಲ್ಲರಿಗೂ ೬೧ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಂಘದ ಸದಸ್ಯರೆಲ್ಲಾ ಸೇರಿ, ನಮ್ಮ ಸಂಘದ ಈ ವರುಷದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮವನ್ನು ಭಾರೀ ಭೋಜನದಿಂದ ಶುರುಮಾಡಿ ಬಹಳ ವಿಜ್ಹ್ರಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ರತ್ನಮಾಲಾ ಪ್ರಕಾಶ್ ರವರ ಭಾವ ಸಂಗಮ ಕಾರ್ಯಕ್ರಮ ಎಲ್ಲರನ್ನೂ ಭಾವ ಸಮುದ್ರದೆಡೆ ಕರೆದುಕೊಂಡು ಹೋಯಿತು. ಕಾರ್ಯಕ್ರಮವು  ನಾಟಕೋತ್ಸವದಲ್ಲಿ ಅತ್ತ್ಯುತ್ತಮ ನಾಟಕ ಎಂಬ ಪ್ರಶಸ್ತಿಗೆ ಪಾತ್ರವಾದ, ಟ್ರೆಡ್ಮಿಲ್ ನಾಟಕದಿಂದ ಕೊನೆಗೊಂಡಿತು.

ಪ್ರಸಕ್ತ ಸಮಿತಿಯ ಕಾರ್ಯಚರಣೆ ಶುರುವಾಗಿ ಎರಡು ವರ್ಷದ ಮೇಲಾಗಿ, ರಾಜ್ಯೋತ್ಸವದ ಸಂದರ್ಭದಲ್ಲಿ ಸಾಂಕೇತಿಕವಾಗಿ ಮುಗಿದಿದೆ. ಮುಂಬರುವ ಕಾರ್ಯಕಾರಿ ಸಮಿತಿಗೆ ಈ ಜವಾದ್ದಾರಿಯುತ ಅಧಿಕಾರವನ್ನು ಸಂಪೂರ್ಣವಾಗಿ   ವಹಿಸುವ ಕೆಲಸ ಮಾತ್ರ ಬಾಕಿ ಇದೆ . ಈ ಕಾಲಾವಧಿಯಲ್ಲಿ ಪ್ರಸಕ್ತ ಸಮಿತಿಯು ಬಹಳಷ್ಟು ಪ್ರಗತಿಪರ ಬದಲಾವಣೆ ತಂದಿರುವುದು ನಿಮಗೆ ಈಗಾಗಲೇ ತಿಳಿದಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಊಟ, ಆಟ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಸಮಿತಿಯ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ, ಸಂಘದ ಹಿರಿಯ ಸದಸ್ಯರು ಹಾಗೂ ಕಿರಿಯ ಸದಸ್ಯರೆಲ್ಲರಿಗೂ ಕಾರ್ಯಕ್ರಮಗಳಲ್ಲಿ ಅವಕಾಶ, ಸಂಘದ ಸದಸ್ಯರಿಗೆ ಸ್ವಯಂ ಸೇವೆಗೆ ಉತ್ತೇಜನೆ ಇವೇ ಮುಂತಾದವು. ಇದರ ಪರಿಣಾಮ, ಎಲ್ಲರೂ ಸಂಘದ ಕಾರ್ಯಚಟುವಟಿಕೆಗೆ ಪಾಲ್ಗೊಳ್ಳಲು ಮುಂದಾಗಿ ಬರುತ್ತಲಿರುವುದು, ಆ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುತ್ತಿರುವುದು ಹೆಗ್ಗಳಿಕೆಯ ವಿಷಯ.

ಈ ಬದಲಾವಣೆಗಳನ್ನು  ತರುವಲ್ಲಿ, ನನ್ನೊಡನೆ ಕೈಜೋಡಿಸಿದವರು ಉಪಾಧ್ಯಕ್ಷರ ಸ್ಥಾನದಲ್ಲಿ ಅಮೃತ್ ದತ್ತಾತ್ರೆಯ, ಕಾರ್ಯದರ್ಶಿಗಳ ಸ್ಥಾನದಲ್ಲಿ ರವಿ ವಿಶ್ವನಾಥ್, ಖಾಜಾಮ್ಚಿಯಾಗಿ ಸವಿತಾ ಪ್ರದೀಪ್, ಊಟದ  ಉಸ್ತುವಾರರಾದ ಶಿರೀಶ್ ಕಾವೂರ್, ಆಟದ ಉಸ್ತುವಾರರಾದ ಪ್ರತಾಪ್ ಬಿ. ಆರ್, ಕಂಪು e-ಪತ್ರಿಕೆಯ ಸಂಪಾದಕಿ ಪೂರ್ಣಿಮಾ ಸುಬ್ರಮಣ್ಯ, ಕಂಪು  ಬ್ಲಾಗ್ ಉಸ್ತುವಾರರಾದ ಶಶಿಕಿರಣ್ ಹಾಗೂ ಪಬ್ಲಿಸಿಟಿ ಉಸ್ತುವಾರರಾದ ಅನು ಬೆನಕಟ್ಟಿ, ಅಂತರ್ಜಾಲ ಉಸ್ತುವಾರರಾದ ವಂದನಾ ಶರ್ಮ. ಇವರೆಲ್ಲರಿಗೂ ಹಾಗೂ  ಇವರ ಕುಟುಂಬದವರಿಗೂ  ಧನ್ಯವಾದಗಳು. ಅಲ್ಲದೆ ಈ ಎಲ್ಲಾ ಪ್ರಯತ್ನಕ್ಕಾಗಿ, ನನಗೆ  ಸಂಪೂರ್ಣ ಸಹಕಾರ ನೀಡಿದ ನನ್ನ ಕುಟುಂಬದವರಿಗೆಲ್ಲರಿಗೂ  ಹೃದಯಪೂರ್ವಕ ಧನ್ಯವಾದಗಳು.

ನಿಮ್ಮೆಲ್ಲರ  ಪ್ರೀತಿ, ಸಹೃದಯದ ಸಹಕಾರದಿಂದ ನಮ್ಮ ಸಮಿತಿಯ ಕಾರ್ಯಾಚರಣೆ ಸುಗಮವಾಗಿ ಸಾಗಿ ಬಂತು. ಇದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು. ಬನ್ನಿ, ಶ್ರೀವತ್ಸ ರಾಮನಾಥನ್ ನೇತೃತ್ವದ ಮುಂಬರುವ ಕಾರ್ಯಕಾರಿ ಸಮಿತಿಯನ್ನು ಸ್ವಾಗತಿಸೋಣ, ಹಾಗೂ  ಅವರ ಸಮಿತಿಗೂ ಇದೇ ರೀತಿ  ಸಹಕಾರ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ನಾವೆಲ್ಲರೂ ಒಟ್ಟಿಗೂಡಿ ಕರುನಾಡ ದೀಪ, ಸಿರಿ ನುಡಿಯ ದೀಪವನ್ನು, ಓಲವೇತ್ತಿ ತೋರುವ ದೀಪವನ್ನು ಹಚ್ಹೋಣ ಬನ್ನಿ.
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಜೈ ಭುವನೇಶ್ವರಿ, ಜೈ ಕರ್ನಾಟಕ , ಜೈ MKANT

ಇಂತಿ ನಿಮ್ಮೆಲ್ಲರ,
ವಿದ್ಯಾ ದತ್ತ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ